Monday, August 29, 2011

ಜರ್ನಿ ಟು ರಾಯಚೂರ್

ಕಪ್ಪು ಮಣ್ಣಿನ ಕವನ
 ಶುರುವಾಗಿದ್ದೆ ತಡ
ಕಾಪಿ, ಚಾ, ಚಿಪ್ಸು
ರೈಲಿನ ಬೊಗಿವಳಗೆ

 ಶೇಂಗ, ಹತ್ತಿ, ಸೊಯ ಅವರೆಯದ್ದೆ
ಕಾರುಬಾರು
 ರೈಲಿನ ಕಿಟಿಕಿಯಿಂದಾಚೆ

ಚಕ್ಕುಲಿ ತಿಂದು ಹೊರಟಿದ್ದು
ರಾಯಚೂರಿಗೆ
 ಕವನ  ಶುರುವಾಗಿ ಅರ್ದ ದಾರಿಗೆ
ಮುಕ್ತಾಯ
  ಕಪ್ಪು ಮಣ್ಣಿನ ನೆಲ

ಗದಗ ಬಿಟ್ಟೊಡನೆ
ಎಲೆಲ್ಲು ಕೆಂಪು ಮಣ್ಣು
ಹೊಸಪೇಟೆಯ ಹೊಸನೆಲ
ತುಂಗಭದ್ರೆ ಡ್ಯಾಮ್

ಜಿಂದಾಲ್ ಬಿಟ್ಟ್ ಬಳ್ಳಾರಿಗೆ
ರವಿಯ ಬೇಟಿ
ರಂಗೇರಿದ್ದ ನದಿ ಕಾಲುವೆಗಳು

ಮಂತ್ರಾಲಯ ಮಂತ್ರಸಿದ್ದಿಯಿಂದ
ಮಸರನ್ನ ಚಿತ್ರನ್ನ ಹೊಟ್ಟೆಗೆ
   ಅದ್ಕೊಂದಿಸ್ಟ್ ಬಿಸ್ಕೆಟ್  ಚಾ

ರಾತ್ರಿಯಲ್ಲಿ
ರಾಜೇಶ್ನದ್ದೇ ರಾಯಬಾರಿ
ರಾಯಚೂರ್ನಲ್ಲಿ  
                        
                      - ಪ್ರಭು ಕೆ. ಏನ್.